ವಿದ್ಯಾಸಿರಿ ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ:
2023-24 ವಿದ್ಯಾರ್ಥಿ ವೇತನ ಅಧಿಸೂಚನೆ.
ಕರ್ನಾಟಕ ರಾಜ್ಯ ಸರ್ಕಾರದಿಂದ 2023- 2024ನೇ ವರ್ಷದ ವಿದ್ಯಾ ಸಿರಿ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಿದ್ದು ಅದನ್ನು ಯಾವ ರೀತಿ ಪಡೆಯಬೇಕು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಯಾವ ರೀತಿ ಅಪ್ಲಿಕೇಶನ್ ಪ್ರಕ್ರಿಯೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಒಂದು ಬಾರಿ ಓದಿ ತಿಳಿದು ಅರ್ಥಮಾಡಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.
ವಿದ್ಯಾಸಿರಿ ಸ್ಕಾಲರ್ಶಿಪ್ 2023-2024: ವಿದ್ಯಾಸಿರಿ (ಕರೇಪಾಸ್) ಎಂಬುದು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒದಗಿಸಲಾದ ಒಂದು ರೀತಿಯ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಮೆಟ್ರಿಕ್ಯುಲೇಷನ್ ನಂತರದ ಕಾರ್ಯಕ್ರಮಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ SC/ST/OBC/PWD ವಿದ್ವಾಂಸರಿಗಾಗಿ ಈ ವಿದ್ಯಾರ್ಥಿವೇತನವನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ವಿದ್ಯಾರ್ಥಿವೇತನದ ಮುಖ್ಯ ಗುರಿಯು ದುರ್ಬಲ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಮತ್ತು SC/ST/OBC/PWD ಗೆ ಸೇರಿದ ಕರ್ನಾಟಕದ ಕಲಿಯುವವರ ಶೈಕ್ಷಣಿಕ ಬೆಳವಣಿಗೆ ಮತ್ತು ವರ್ಧನೆಯಾಗಿದೆ.
ಇದಲ್ಲದೆ, ಕರ್ನಾಟಕ ಸರ್ಕಾರವು ಇ-ಪಾಸ್ (ಎಲೆಕ್ಟ್ರಾನಿಕ್ ಪಾವತಿ ಮತ್ತು ವಿದ್ಯಾರ್ಥಿವೇತನದ ಅರ್ಜಿ ವ್ಯವಸ್ಥೆ) ಮೂಲಕ ವಿದ್ಯಾರ್ಥಿವೇತನ ವಿತರಣೆ ವ್ಯವಸ್ಥೆಯನ್ನು ಸುಲಭಗೊಳಿಸಲು ಶ್ರಮಿಸುತ್ತಿದೆ. ಇಪಾಸ್ ವ್ಯವಸ್ಥೆಯು ಖಜಾನೆ, ಸೆಕೆಂಡರಿ ಸ್ಕಾಲರ್ಶಿಪ್ ಲೀವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ), ಕಾಲೇಜುಗಳು ಮತ್ತು ಬ್ಯಾಂಕ್ಗಳಂತಹ ಎಲ್ಲಾ ಕಲ್ಯಾಣ ಇಲಾಖೆಗಳನ್ನು ಸ್ಟೈಪೆಂಡರಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ ವಿತರಣೆಯನ್ನು ಒಂದುಗೂಡಿಸುತ್ತದೆ.
- ಪ್ರತಿಭಾವಂತ ವಿದ್ಯಾರ್ಥಿಗಳು ಬಡ ಕುಟುಂಬದವರು ಎಲ್ಲ ವರ್ಗದ ಕುಟುಂಬದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಆರ್ಥಿಕ ಸಹಾಯ ಹಿತದೃಷ್ಟಿಯಿಂದ ರಾಜ್ಯ ಕರ್ನಾಟಕ ಸರ್ಕಾರವು ವಿದ್ಯಾಸಿರಿ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ
vidya shree scholarship 2023-24 post matric students:-
- ವೇತನದ ಹೆಸರು :- SSP ವಿದ್ಯಾರ್ಥಿ ವೇತನ ಮೆಟ್ರಿಕ್ ನಂತರ ಕೋರ್ಸ್ ವಿದ್ಯಾರ್ಥಿಗಳು
- ಇಲಾಖೆ :- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿದ್ಯಾಸಿರಿ ಸ್ಕಾಲರ್ಶಿಪ್ ವೇತನದ ಅರ್ಹತೆಗಳು:-
- ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.ಆ) ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ, ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.ಇ) ಕರ್ನಾಟಕದ ಶಾಸನಬದ್ದ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ, ಸರ್ಕಾರಿ / ಸ್ಥಳೀಯ ಸಂಸ್ಥೆ/ ಅನುದಾನಿತಸಂಸ್ಥೆಗಳು / ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಸಂಸ್ಥೆಗಳಲ್ಲಿ – ಮೆಟ್ರಿಕ್ ನಂತರದ ಕೋರ್ಸುಗಳಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
- ಯಾವುದೇ ಇಲಾಖೆಯ ಸರ್ಕಾರಿ / ಸರ್ಕಾರಿ ಅನುದಾನಿತ ವಿದ್ಯಾರ್ಥಿನಿಲಯ / ವಸತಿ ಕಾಲೇಜುಗಳಲ್ಲಿ, ಪ್ರವೇಶ ದೊರೆಯದಹಾಗೂ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ, ವಿದ್ಯಾಸಿರಿ- ಊಟಮತ್ತು ವಸತಿ ಕಾರ್ಯಕ್ರಮದಲ್ಲಿ ಮಂಜೂರಾತಿ ನೀಡಲಾಗುವುದು.
- ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಪ್ರತಿ ತಿಂಗಳಿಗೆ ರೂ.1500/-ರಂತೆ, ಶೈಕ್ಷಣಿಕ ಅವಧಿಯಲ್ಲಿ ಪ್ರತಿ ವರ್ಷ 10 ತಿಂಗಳಿಗೆ ಒಟ್ಟು
ರೂ.15,000/- ಸಹಾಯಧನವನ್ನು, ಇತರೆ ನಿಬಂಧನೆಗಳಿಗೊಳಪಟ್ಟು, ವಿದ್ಯಾರ್ಥಿಗಳು ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ
ಇರುವ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಖಾತೆಗೆ, ಆನ್ಲೈನ್ ಮೂಲಕ ಜಮಾ ಮಾಡಲಾಗುವುದು. - ವಿದ್ಯಾರ್ಥಿಗಳು(i) ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ,(ii) ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು(iii) ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ-ಇವುಗಳಲ್ಲಿ ಯಾವುದಾದರೂ ಒಂದು ಸೌಲಭ್ಯಕ್ಕೆ ಮಾತ್ರ ಅರ್ಹರಿರುತ್ತಾರೆ.
ವಿದ್ಯಾಸಿರಿ ವೇತನದ ದಾಖಲೆಗಳು:-
- ಹತ್ತನೇ ತರಗತಿ ಪಾಸಾದ ನೊಂದಣಿ ಸಂಖ್ಯೆ
- .ಜಾತಿ ಮತ್ತು ಆದಾಯ ಪ್ರಮಾಣ ಪತ್ರ.ಆಧಾರ್ ಕಾರ್ಡ್.ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್
- .ಪ್ರಸ್ತುತ ಚಾಲ್ತಿಯಲ್ಲಿರುವ ಇಮೇಲ್ ಐಡಿ.
- ಕಾಲೇಜು ನೊಂದಣಿ ಸಂಖ್ಯೆ ಮತ್ತು ದಾಖಲಾತಿಗಳು.
- ವಿದ್ಯಾರ್ಥಿಯು ಅಂಗವಿಕಲ ರಾಗಿದ್ದರೆ ಸರ್ಕಾರದಿಂದ ನೀಡಿರುವ ಯುಡಿ ಐಡಿ(UDID) ಗುರುತಿನ ಸಂಖ್ಯೆ
- .ವಿದ್ಯಾರ್ಥಿಯ ವಾಸವಿರುವ ಜಿಲ್ಲೆ ತಾಲೂಕು ವಿಧಾನಸಭಾ ಹೆಸರು ಮತ್ತು ಮನೆ ವಿಳಾಸ.ವಿದ್ಯಾರ್ಥಿಯ ಹಾಸ್ಟೆಲ್ ಸ್ವ ವಿವರಗಳು (ಬೇಕಾಗಿದ್ದಲ್ಲಿ).ಸಂಬಂಧಪಟ್ಟ ದಾಖಲೆಗಳ ಇ- ದೃಡೀಕರಣ ಸಂಖ್ಯೆ.
ಅರ್ಜಿ ಸಲ್ಲಿಸುವುದು ಹೇಗೆ, ವಿದ್ಯಾಸಿರಿ ವಿದ್ಯಾರ್ಥಿವೇತನ 2024 OBC:-
SSP scholarship portal :- https://ssp.postmatric.karnataka.gov.in ಈ ಪೋರ್ಟಲ್ ಗೆ ಹೋಗಿ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಲು ದಾಖಲೆಗಳೊಂದಿಗೆ ಈ ಪೋರ್ಟಲ್ ಗೆ ಭೇಟಿ ನೀಡಿ
ಗಮನಕ್ಕೆ
SSP ವಿದ್ಯಾಸಿರಿ ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ 15.02.2023ರ ಮುಂಚಿತವಾಗಿ ಈ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ
SSP scholarship ಪೋಸ್ಟ್ಮೆಟ್ರಿಕ್ ಸ್ಕಾಲರ್ಶಿಪ್ ಮಾಹಿತಿಗಾಗಿ ಮತ್ತು ಯಾವ ದಾಖಲೆಗಳು ಬೇಕಾಗುತ್ತದೆ ಎಂಬ ಸಂಯುಕ್ತ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ
ನಮ್ಮ ಟೆಲಿಗ್ರಾಂ ಗ್ರೂಪಿಗೆ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

1 comment
Help sir